ಹಾಡು: ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಚಿತ್ರ : ಸಂಜು ವೆಡ್ಸ್ ಗೀತ
ಸಾಹಿತ್ಯ: ಕವಿರಾಜ್
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಕಡಲು ಕರೆದಂತೆ ನದಿಯನು ಭೇಟಿಗೆ..
ಯಾರು ಬಂದಿರದ ಮನಸಲಿ .. ನಿನ್ನ ಆಗಮನ ಈ ದಿನ ..
ನೀಡುವ ಮುನ್ನ ನಾನೇ ಆಮಂತ್ರಣ ..
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಕಡಲು ಕರೆದಂತೆ ನದಿಯನು ಭೇಟಿಗೆ..
ಜೀವನ ಈ ಕ್ಷಣ ಶುರುವಾದಂತಿದೆ ..
ಕನಸಿನ ಊರಿನ ಕದ ತೆರೆಯುತ್ತಿದೆ ..
ಅಳಬೇಕು ಒಮ್ಮೆ ಅಂತನಿಸಿದೆ .. ಖುಷಿಯೀಗ ಮೇರೆ ಮೀರಿ ..
ಮಧುಮಾಸದಂತೆ ಕೈಚಾಚಿದೆ .. ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೇ ಆಮಂತ್ರಣ ..
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ ..
ಕಡಲು ಕರೆದಂತೆ ನದಿಯನು ಭೇಟಿಗೆ ..
ಯಾರು ಬಂದಿರದ ಮನಸಲಿ .. ನಿನ್ನ ಆಗಾಮನ ಈ ದಿನ ..
ನೀಡುವ ಮುನ್ನ ನಾನೇ ಆಮಂತ್ರಣ ..
ಸಾವಿನ ಅಂಚಿನ ಬದುಕಂತಾದೆ ನೀನು ..
ಸಾವಿರ ಸೂರ್ಯನ ಬೆಳಕಂತಾದೆ ನೀನು ..
ಕೊನೆಯಾಸೆ ಒಂದೇ ಈ ಜೀವಕೆ ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲ್ಲೂ ನೀ ಹೀಗೆಯೇ ನನ್ನ ಪ್ರೀತಿ ಮಾಡಬೇಕು..
ನೀಡುವ ಮುನ್ನ ನಾನೇ ಆಮಂತ್ರಣ ..
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ ..
ಕಡಲು ಕರೆದಂತೆ ನದಿಯನು ಭೇಟಿಗೆ ..
ಯಾರು ಬಂದಿರದ ಮನಸಲಿ .. ನಿನ್ನ ಆಗಾಮನ ಈ ದಿನ ..
ನೀಡುವ ಮುನ್ನ ನಾನೇ ಆಮಂತ್ರಣ ..
ಗಗನವೇ ಬಾಗಿ....
No comments:
Post a Comment