ಹಾಡು: ಸಂಜು ಮತ್ತು ಗೀತ ಸೇರಬೇಕು ಅಂತ..
ಚಿತ್ರ : ಸಂಜು ವೆಡ್ಸ್ ಗೀತ
ಸಾಹಿತ್ಯ: ಕವಿರಾಜ್
ಸಂಜು ಮತ್ತು ಗೀತ ಸೇರಬೇಕು ಅಂತ..
ಬರೆದಾಗಿದೆ ಇಂದು ಬ್ರಹ್ಮನು ..
ನನ್ನ ಜೀವಕಿಂತ .. ನೀನೆ ನನ್ನ ಸ್ವಂತ ..
ಇರುವಾಗ ನಾನು ಚಿಂತೆ ಏನು ..
ನಿನ್ನ ಎಲ್ಲ ನೋವನ್ನು .. ಕೊಡುಗೆ ನೀಡು ನನಗಿನ್ನೂ ..
ನನ್ನ ಎಲ್ಲ ಖುಷಿಯನ್ನು . ಕೊಡುವೆ ನಿನ್ನ ವಶಕಿನ್ನು ..
ಮಳೆಯ ಹನಿ ಉರುಳೋ ದನಿ ತರವೇ ..
ನಗಬಾರದೇ .. ನಗಬಾರದೇ .. ನನ್ನೊಲವೆ ..
ಸಂಜು ಮತ್ತು ಗೀತ ಸೇರಬೇಕು ಅಂತ ..
ಬರೆದಾಗಿದೆ ಇಂದು ಬ್ರಹ್ಮನು ..
ಆ ಕಣ್ಣಿಗೊಂದು ಈ ಕಣ್ಣಿಗೊಂದು .. ಸ್ವರ್ಗನ ತಂದು ಕೊಡಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ .. ನಿನ್ನ ಎಎ ಕಣ್ಣಲಿ ಇದೆ ಕೊನೆಯ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ .. ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೇ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೆ ..
ಮಳೆಯ ಹನಿ ಉರುಳೋ ದನಿ ತರವೇ ..
ನಗಬಾರದೇ .. ನಗಬಾರದೇ .. ನನ್ನೊಲವೆ ..
ಸಂಜು ಮತ್ತು ಗೀತ ಸೇರಬೇಕು ಅಂತ ..
ಬರೆದಾಗಿದೆ ಇನ್ಧು ಬ್ರಹ್ಮನು ..
ತಂಗಾಳಿಯಾಗೋ ಬಿರುಗಾಳಿಯಾಗೋ ನೀ ಒಮ್ಮೆ ಬಂದು ನನ್ನ ಸೋಕಿ ಹೋಗು ..
ನಿನ್ನ ನೋಡದೆ ಅಳುವೇ ಬರುತಿದೆ .. ನಿನ್ನ ನಗುವಿಲ್ಲದೆ ಜಗ ನಿಂತಿದೆ ..
ನಿದಿರೆ ಬರದ ಕನ್ನೆ .. ಬಾರೆ ಹಗಲು ಗನಸ ಹಾಗೆ ..
ಬಳಲಿ ಹೋದ ನನಗೆ .. ಬಾರೆ ಜೀವ ತುಂಬೋ ಹಾಗೆ ..
ಉಸಿರಾಡುವ ಶವವಾದೆ ನಾ , ನೀನು ಇಲ್ಲದೆ ..
ಮಳೆ ನಿಂತರು ಮರದ ಹನಿ ತರವೇ ..
ಬಾ ಇಲ್ಲಿಗೆ .. ನನ್ನಲ್ಲಿಗೆ .. ನನ್ನೊಲವೆ ..
ಸಂಜು ಮತ್ತು ಗೀತ ಸೇರಬೇಕು ಅಂತ ..
ಬರೆದಾಗಿದೆ ಇಂದು ಬ್ರಹ್ಮನು ..
No comments:
Post a Comment